Sunday, 22 September 2019

ಕರುಣಾಳು ಬಾ ಬೆಳಕೆ

ಸ್ನೇಹಿತರೇ, ಕರುಣಾಳು ಬಾ ಬೆಳಕೆ  ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು ಎಂದು ನಮ್ಮಲ್ಲಿನ ಮೂಕ   ಆತ೯ನಾದ ಅವ್ಯಕ್ತವಾಗಿ ಕಾಣದ ಅದೖಶ್ಯ ಶಕ್ತಿಯನ್ನು  ಸದಾ  ಬೇಡುತ್ತಿರುತ್ತದೆ. ನಾನು ಇತ್ತೀಚೆಗೆ ಓದಿದ ಡಾ ಗುರುರಾಜ ಕಜ೯ಗಿಯವರ ಕರುಣಾಳು ಬಾ ಬೆಳಕೆ  ಪುಸ್ತಕ ನನ್ನೀ ಮಾತಿಗೆ ಪ್ರೇರಣೆ.
ಪುಸ್ತಕದ  ಕುರಿತು ನನ್ನಲ್ಲಿ ಮೂಡಿದ ಅನಿಸಿಕೆಗಳನ್ನು  ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು.
  ಕಥನಕಲೆ ಎನ್ನುವ  ಅಪೂವ೯ ವಿದ್ಯೆ ಎಲ್ಲರಿಗೂ ಸಾಧಿತವಲ್ಲ. ಕೆಲವರು ಮಾತ್ರ ಸಿದ್ದಿಸಿಕೊಂಡಿರುತ್ತಾರೆ. ನಾನು ಅನೇಕ ಕಥಾ ಸಂಕಲನಗಳನ್ನು ಕಥಾ ಮಾಲಿಕೆ ಹಾಗೂ ಗುಚ್ಛಗಳನ್ನು  ಓದಿದ್ದೇನೆ. ಆದರೆ ಎಲ್ಲದರ ವಸ್ತು ವಿಷಯಗಳು ನಮ್ಮನ್ನು ಸವ೯ಕಾಲಕ್ಕೂ ಹಿಡಿದಿಡುವುದು ಹಾಗೂ ಚಿತ್ತದಲ್ಲಿ ಅಚ್ಚೊತ್ತುವುದು ಕಷ್ಟಸಾಧ್ಯವೇ ಸರಿ.
ಕಜ೯ಗಿಯವರು ಕಥೆ ಹೇಳುವ ರೀತಿ ತಾಯಿ ಮಕ್ಕಳನ್ನು  ತಿದ್ದುವ ಪ್ರೀತಿಯೋ , ಗುರುಗಳ ಹಿತನುಡಿಯೋ,  ಕಾಂತಾಸಮ್ಮಿತ ಉಪದೇಶವೋ, ಭಕ್ತನಿಗೆ  ದೇವರ ಆಣತಿಯೋ ನ್ಯಾಯಾಧೀಶನ ಆಜ್ಞೆಯೋ, ಪರಮಾಪ್ತ ಗೆಳೆತನದ  ಸಲಹೆಯೋ,ಪತ್ರಿಕಾ ಸಂಪಾದಕೀಯವೋ  ಹೀಗೆ ಯಾವೊಂದೂ  ಹಾಗೂ ಏನೆಂದೂ ನಿಣ೯ಯಿಸಲಾಗದು. ಅಂತಹ ಅದ್ಭುತ ಆತ್ಮಸಂವಾದ. 
ಫ್ರಜಾವಾಣಿಯ ಅಂಕಣದಲ್ಲಿ ಸದರಿ ಮಾಲಿಕೆ  ಪ್ರಕಟವಾಗಿ ಅಪಾರ ಜನಪ್ರಿಯತೆಯನ್ನು ಗಳಿಸಿಕೊಂಡಿದೆ.  ಆದರೂ  ಈ  ಕಥಾ ಸಂಕಲನದಲ್ಲಿ ತಾವು  ಶಿಕ್ಷಣ ತಜ್ಞರು  ಹಾಗೂ ಸಾಧಕರು ಎಂತಲೂ ಸಹಸ್ರಾರು ವಿದ್ಯಾಥಿ೯ಗಳಿಗೆ ಮಾಗ೯ದಶ೯ಕರೆಂಬ ಹಮ್ಮು-ಬಿಮ್ಮುಗಳಾಗಲೀ ,  ಒತ್ತಾಯಪೂವ೯ಕ ಆಗ್ರಹವಾಗಲೀ  ಕಟ್ಟುನಿಟ್ಟಿನ ನಿಯಮಗಳಲ್ಲಿ ಕಟ್ಟಿಹಾಕುವ  ಪ್ರಯತ್ನವಾಗಲೀ ಅವರು ಮಾಡಿಲ್ಲ. ಬದಲಾಗಿ ನಮ್ಮ ಹರಿದಾಡುವ ಮನವನ್ನು ಹಿಡಿದಿಡುತ್ತಾರೆ. ಅವರ  ಚಿಂತನೆಯ ವತು೯ಲದ ಸುಳಿಯೊಳಗೆ ನಾವಾಗಿಯೇ ನಮಗರಿವಿಲ್ಲದಂತೆ ಮೌನವಾಗಿ ನಮ್ಮನ್ನು ನಾವು ಕಳೆದುಕೊಂಡು ಲೀನವಾಗಿಬಿಡುತ್ತೇವೆ.
ಸಾಧಿಸಬೇಕೆನ್ನುವವರಿಗೆ ಕಿರುದೀವಿಗೆಯನ್ನು  ಹೊತ್ತಿಸಿಕೊಟ್ಟು ಈ ಕತ್ತಲಿನ ಜಗದಲ್ಲಿ ಬೆಳಕಿನ ಮಿಂಚನ್ನು ಹೇಗೆ ಕಂಡುಕೊಳ್ಳಬಹುದೆಂದು ತಿಳಿಸಿ ಉಪಕರಿಸಿದ್ದಾರೆ. ನಮ್ಮ ಸುತ್ತ-ಮುತ್ತಲಿನ  ಪರಿಸರದಲ್ಲಿ  ಭಾವನಾ ಪ್ರಪಂಚದಲ್ಲಿ  ಯಶಸ್ವೀ ಬಾಳ್ವೆಯನ್ನು  ಹಾಗೂ ಸಾಥ೯ಕ  ಜೀವನವನ್ನು ಹೇಗೆಲ್ಲಾ ನಡೆಸಬಹುದೆಂಬುದನ್ನು  ನೂರಾರು ಸುಂದರ  ನಿದಶ೯ನಗಳು ಹಾಗೂ ಜ್ವಲಂತ  ಸಾಕ್ಷಿಗಳನ್ನು ಒಂದೊಂದಾಗಿ ಅನಾವರಣಗೊಳಿಸುತ್ತಲೇ  ನಮ್ಮನ್ನು ಆತ್ಮಾವಲೋಕನಕ್ಕೆ  ಹಚ್ಚಿಬಿಡುತ್ತಾರೆ. ಎಂಥ ದಾಶ೯ನಿಕನಾದರೂ , ಮಹಾ ಮಾನವತಾವಾದಿಯೂ, ಸವ೯ಸಂಗ ಪರಿತ್ಯಾಗಿಯೂ  ಹೀಗೆ ಯಾರೇ ಆದರೂ ಪರಿಪೂಣ೯ ಪ್ರಜ್ಞಾವಂತರಲ್ಲ /ಸವ೯ಜ್ಞರಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಬದುಕಿನುದ್ದಕ್ಕೂ ಕಲಿಕೆ ನಿರಂತರ . ಇವರು ಹೇಳುವ ಆದಶ೯,  ಮೌಲ್ಯ, ಋಜುತ್ವ , ಜೀವನಶ್ರದ್ಧೆ ಯನ್ನು ಮೂಡಿಸಿ,  ಜೀವನೋತ್ಸಾಹವನ್ನು ನೂಮ೯ಡಿಗೊಳಿಸುವ ಬದುಕನ್ನು ಕಟ್ಟಿಕೊಳ್ಳಲು ಸ್ಫೂತಿ೯ ನೀಡುವ ಬಗೆ  ಅಚ್ಚರಿ ಮೂಡಿಸುತ್ತದೆ.
ನಿಜಕ್ಕೂ ಇದೊಂದು ಅಮೖತದ ಅಕ್ಷಯಪಾತ್ರೆ. ನಮ್ಮಲ್ಲಿನ ದಿವ್ಯ  ಅದಮ್ಯ ಚೇತನವನ್ನು ಜಾಗೖತಗೊಳಿಸಿ ಉದ್ದೀಪನಗೊಳಿಸುವ ಸುಂದರ ಸುದೀಘ೯ ಬೆಳಕಿನ ಯಾತ್ರೆ.
ಅವರು ಉದಾಹರಿಸುವ ಪಾತ್ರಗಳು ನಾವೇ / ನಮ್ಮವೇ/ ನಮ್ಮವರ ಮಧ್ಯದಲ್ಲಿಂದ ಮೂಡಿದವೇ.
       ಮನಸ್ಸೆಂಬ ಮಾಯಾಕನ್ನಡಿಯಲ್ಲಿ  ನಮ್ಮೊಳಗಿನ  ಪ್ರತಿಬಿಂಬವನ್ನು ಹೇಗೆ ನಾವು  ನಿಚ್ಚಳವಾಗಿ ಅರಿವಿನ ಬೆಳಕಿನೊಂದಿಗೆ ಕಾಣಬಹುದು ಎಂಬುದನ್ನು  ಪರಮೋಚ್ಚವಾಗಿ ನಿರೂಪಿಸಿದ್ದಾರೆ. ಪುಸ್ತಕ ಸಿಕ್ಕರೆ ಮರೆಯದೇ ಓದಿ ಮನಸು ಹಗುರಾಗುತ್ತದೆ. ಮೆಲುಕು ಹಾಕುವ ಹೊತ್ತಿಗೆಯದು. ನಿಮ್ಮ ವೈಯಕ್ತಿಕ ಸಂಗ್ರಹದಲ್ಲಿ ಅದರಲ್ಲೂ ನಿಮ್ಮ ಅಂತರಂಗದಲ್ಲೊಂದಿಷ್ಟು ಜಾಗದಲ್ಲಿ ಭದ್ರ ಮಾಡಿಕೊಳ್ಳಿ.
ಇಂತಿ   ಶ್ರೀಮತಿ ಭಾರತಿ ರಘು.

1 comment:

  1. ಕರುಣಾಳು ಬಾ ಬೆಳಕೆ ಪುಸ್ತಕ ಮತ್ತು ಅದರ ಸಂಚಿಕೆಗಳನ್ನು ತುಂಬಾ ಓದಿದ್ದೇನೆ. ಈಗಲೂ ಪ್ರಜಾವಾಣಿಯಲ್ಲಿ ಓದುತ್ತಿರುತ್ತೇನೆ

    ReplyDelete