Sunday, 22 September 2019

ಜೀವನ ಸಂಧ್ಯೆ ಮರಳಿ ಅರಳುವ ಸಮಯ.

ಜೀವನ ಸಂಧ್ಯೆಯ ಪ್ರವೇಶ ನೇಪಥ್ಯಕೆ ಸಾಗುವ  ದಿನನಿತ್ಯಕೆ ಬೆನ್ನು ಹಾಕಿ  ಹಾರುವ ಪಲಾಯನವಲ್ಲ.
    ಅದು  ನವ ಜೀವನದ ಮರುಹುಟ್ಟು.  ಕಳೆದು ಹೋದ ಬಾಳ ನೋವು-ನಲಿವಿನ ಸುಖ-ದುಖಗಳ ಪುನ: ಆವಿಭ೯ವಿಸಿಕೊಂಡು  ಸೋತು ಗೆದ್ದ ಜೀವನದ ಸಿಂಹಾವಲೋಕನ ಆತ್ಮಾವಲೋಕನ  ಮಾಡುತ್ತಾ ಸ್ವತ: ಅಳೆದು ತೂಗಿಕೊಳ್ಳುವ ಸಮಯ.
    ಜೀವನಶ್ರದ್ಧೆ ಮತ್ತು ಜೀವನೋತ್ಸಾಹಗಳನ್ನು ಮತ್ತೊಮ್ಮೆ ಮಗದೊಮ್ಮೆ ಮೈಗೂಡಿಸಿಕೊಳ್ಳುವ  ನವ ರಮ್ಯಚೈತ್ರಕಾಲ .
           ಏಕೆಂದರೆ ಜೀವನ ಒಂದು ಹಂತಕ್ಕೆ ಬಂದಿರುತ್ತದೆ. ವೈಯುಕ್ತಿಕ ಜವಾಬ್ದಾರಿಗಳು ಮೇರುಹಂತಕ್ಕೆ ಬಂದು ಮಕ್ಕಳು ನೆಲೆಯಾಗಿ ಬಾಳ ಹಾದಿ  ಹಾಗೂ ಭವಿತವ್ಯವನ್ನು ಕಟ್ಟಿಕೊಳ್ಳಲು ಹಾತೊರೆಯುತ್ತಿರುತ್ತಾರೆ. ಇಂಥ ಸಮಯದಲ್ಲಿ ಅವರರ ಬೆನ್ನಿಗೆ ನಿಂತು ನೈತಿಕ ಮಾನಸಿಕ ಸ್ಥೈಯ೯ ಹೇಳುತ್ತಾ ಬಾಳನ್ನು ಹಸನುಗೊಳಿಸಿಕೊಳ್ಳಲು ನಯವಾಗಿಯೇ ತಿಳಿಹೇಳುತ್ತಾ  ಅವರ ವೈಯುಕ್ತಿಕತೆಗೆ ಅಂಟಿಯೂ ಅಂಟದಂತಿರಬೇಕು.
          ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ಜೀವನ ಎಂದು ಹಿಮಾಲಯಕ್ಕೋ ಚಾರಾಧಾಮ್ ಯಾತ್ರೆಗೋ ಕಾಣದ ದಿಗಂತಕ್ಕೋ ದೖಷ್ಟಿ ನೆಡುವುದು ತರವಲ್ಲ.  ದೇವರು ಕೊಟ್ಟ ಜೀವನ ಬದುಕಿ ಸವೆಸಿ ಸಾಥ೯ಕ ಪಡಿಸಿಕೊಳ್ಳಬೇಕು.

1 comment: