Sunday, 22 September 2019

ಕನ್ನಡ ಸಂಪದದ ಬಗ್ಗೆ ನಾಲ್ಕು ಮಾತು

ಕನ್ನಡ ಸಂಪದ  ಅಂಕಣ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಸಂವೇದನೆ ಸೖಜನಶೀಲ ವ್ಯಕ್ತಿತ್ವ ಹಾಗೂ ಕ್ರಿಯಾತ್ಮಕ ಮನೋಭಾವ ಹಾಗೂ ಶೀಘ್ರ ಸಂವಹನ - ಸಹಸ್ಪಂದನಕ್ಕಾಗಿ ಒಡಮೂಡಿರುವ ಶ್ರೀ ತಿರು ಶ್ರೀಧರ್ ರವರ ಪ್ರಾಮಾಣಿಕ ಪ್ರಯತ್ನದ ಫಲಶೖತಿ.
           ಕಲೆ  ಸಾಹಿತ್ಯ ಸಂಗೀತ ಸಂಸ್ಕ್ಕೖತಿ ರಂಗಭೂಮು ನಾಟಕ ಚಲನಚಿತ್ರ  ನಾಡಿಗೆ ಅವಿರತ ಸೇವೆ ಸಲ್ಲಿಸಿದ ಅವಿಸ್ಮರಣೀಯರನ್ನು ಹಾಗೂ ಕೆಲವೊಮ್ಮೆ ಪ್ರಾತ:ಸ್ಮರಣೀಯರನ್ನು ಗ್ರಾಂಥಿಕ ರೂಪದಲ್ಲಿ ಅಡಗಿ ಹುದುಗಿಹೋದ ಮಹನೀಯರನ್ನು ಸಮಾಜದ ಮುಖ್ಯಭೂಮಿಕೆಗೆ ಈಗಿನ ಜಾಗತೀಕರಣದ ತಾಂತ್ರಿಕ / ಯಾಂತ್ರಿಕ ಜಗತ್ತಿಗೆ ಅಡಿಯಾಳಾದ ಮನಸಿನ ಸ್ಮೖತಿಪಟಲದಲ್ಲಿ ಮತ್ತೆ ತರುವ  ಸ್ಮರಣಿಕೆ ಹಾಗೂ ಜ್ಞಾಪಿಸಿಕೊಳ್ಳುವ ಧೀಮಂತ ಪ್ರಯತ್ನ.
               ಇಂದು ದುಡ್ಡಿನ ಹಿಂದೆ ನಾಗಾಲೋಟದಲ್ಲಿರುವ ಯಾರಿಗೂ ಭವ್ಯ ಇತಿಹಾಸವನ್ನು ಕೆದಕಿ ಬೆದಕಿ ನೋಡುವ  ಪಾರಂಪರಿಕ  ಚರಿತ್ರೆಯನ್ನು ಸಿಂಹಾವಲೋಕನ ಮಾಡುವ  ಪ್ರಬುಧ್ಧತೆಯಾಗಲೀ  ಮನಸ್ಥಿತಿಯಾಗಲೀ ಇಲ್ಲ. ಇಂತಹ ಸಂದಭ೯ದಲ್ಲಿ ಅಂತಹವರ ಕೈಯಲ್ಲೇ ಇರುವ ಸುಲಭ ಸಾಧನವಾದ ಸಂಚಾರೀ ದೂರವಾಣಿಯೆಂಬ ಮಾಯಾಯಂತ್ರದಲ್ಲಿ ಕೆಲ ಕ್ಷಣಗಳಾದರೂ ಅವನ ಮನಸ್ಸನ್ನು ಹಿಡಿದಿಡುವ ಅದ್ಭುತ  ಕೆಲಸ ರೋಬೋಟ್ ರೀತಿಯಲ್ಲಿಯೇ  ಸೆಳೆಯುವ ಮಾಯಾಜಾಲ ಕನ್ನಡ ಸಂಪದದ್ದು. ಅರಿಯುವ ಮನಸ್ಸು ಸ್ಪಂದಿಸುವ ವೇಳೆ ನಮಗಿದ್ದರೆ ಸಾಕು. ಅದು ಸಮಗ್ರ ಮಾಹಿತಿ ಕಣಜ. ಅರಿವಿನ ವಿಸ್ತಾರದ ಹೊಸಲೋಕವನ್ನೇ ನಮ್ಮುಂದೆ ತೆರೆದಿಡುತ್ತಿದೆ ಕನ್ನಡ ಸಂಪದ. ಬಳಸಿಕೊಳ್ಳುವ ಜಾಣ್ಮೆ ನಮ್ಮಲ್ಲಿದ್ದರೆ ಸಾಕು.

No comments:

Post a Comment